Gruhalakshmi Yojane 23 Installament Credit For Today: ಗೃಹಲಕ್ಷ್ಮಿ ಮಹಿಳೆಯರಿಗೆ ಸಿಹಿ ಸುದ್ದಿ? ಇಂದು ಮತ್ತೆ 2,000 ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?
ಈಗ ನಮ್ಮ ಕರ್ನಾಟಕದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರದ ಪ್ರಮುಖ ಅತ್ಯಂತ ಪ್ರಚಲಿತ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ 23ನೇ ಕಂತಿನ ಹಣವು ಬಿಡುಗಡೆಯಾಗಿದ್ದು. ಇದರಿಂದ ಈಗ ಸುಮಾರು 1.24 ಕೋಟಿ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗ ನವೆಂಬರ್ 28 2025 ರಂದು ಈ ಒಂದು ಯೋಜನೆಯ ಹಣದ ವರ್ಗಾವಣೆ ಈಗ ಬಿಡುಗಡೆಯಾಗಿದ್ದು. ಈಗ ಹಾವೇರಿ, ಉಡುಪಿ, ಬೆಂಗಳೂರು, ಧಾರವಾಡ, ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಜಮಾ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಕೂಡ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಹಣವು ಬಂದು ಜಮಾ ಆಗುವ ಸಾಧ್ಯತೆ ಇದೆ.

ಅದೇ ರೀತಿಯಾಗಿ ಈಗ ಪ್ರತಿ ತಿಂಗಳು 2000 ನೇರ ಹಣಕಾಸು ನೆರವು ನೀಡುವಂತಹ ಯೋಜನೆ ಇದಾಗಿದೆ. ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶ ಏನು ಅಂದರೆ ಮಹಿಳೆಯರನ್ನು ಸಬಲೀಕರಣರನ್ನಾಗಿ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿತ್ತು. ಅದೇ ರೀತಿಯಾಗಿ ಈಗ ಕೆಲವೊಂದು ಮಹಿಳೆಯರ ಖಾತೆಗಳಿಗೆ ಈ ಒಂದು ಹಣ ಜಮಾ ಆಗದೆ ಇರುವ ಕಾರಣ ಮಹಿಳೆಯರು ಅಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಹಾಗಿದ್ದರೆ ಇದಕ್ಕೆ ಮುಖ್ಯ ಕಾರಣಗಳು ಏನು ಮತ್ತು ನಿಮ್ಮ ಸ್ಟೇಟಸ್ ಅನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಚಲಿತದಲ್ಲಿ ಇರುವಂತಹ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಈಗಾಗಲೇ ಈ ಒಂದು ಗೃಹಲಕ್ಷ್ಮಿ ಯೋಜನೆ 23ನೇ ಕಂತಿನ ಹಣ ನವೆಂಬರ್ 28ರಂದು ಈಗ ಡಿಬಿಟಿ ಮೂಲಕ ಪ್ರತಿಯೊಬ್ಬ ಮಹಿಳಾ ಖಾತೆಗಳಿಗೆ ಬಿಡುಗಡೆಯಾಗಿದ್ದು. ಮೊದಲಿಗೆ ಈಗ ಧಾರವಾಡ, ಉಡುಪಿ, ಹಾವೇರಿ, ಬೆಂಗಳೂರು, ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಯಲ್ಲಿರುವಂತ ಫಲಾನುಭವಿಗಳ ಖಾತೆಗಳಿಗೆ ಈ ಒಂದು ಹಣವು ಜಮಾ ಆಗಿದೆ.
ಅಷ್ಟೇ ಅಲ್ಲದೆ ಈಗ ಇನ್ನುಳಿದಂತಹ ಜಿಲ್ಲೆಗಳಾದ ಮೈಸೂರು, ಚಿಕ್ಕಮಂಗಳೂರು, ಶಿವಮೊಗ್ಗ ಮತ್ತು ತುಮಕೂರುಗಳಲ್ಲಿ ಕೂಡ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಹಣವು ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಕಂತುಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ವಹಣೆ ಮಾಡುತ್ತಾ ಇದ್ದು.
ಈ ಒಂದು ಹಣ ಬಿಡುಗಡೆಯಾಗುವ ಸಮಯದಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಒಂದು ಹಣದ ಬಿಡುಗಡೆಯಾದ ವಿಳಂಬವಾಗುತ್ತ ಇದೆ. ಅಷ್ಟೇ ಅಲ್ಲದೆ ಈಗಾಗಲೇ 70% ನಷ್ಟು ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ಈ ಒಂದು ಹಣ ಜಮಾ ಆಗಿದ್ದು. ಇನ್ನು ಕೆಲವೇ ದಿನಗಳಲ್ಲಿ ಇನ್ನುಳಿದ 30% ಮಹಿಳೆಯರ ಖಾತೆಗಳಿಗೂ ಕೂಡ ಈ ಒಂದು ಹಣ ಕೆಲವೇ ದಿನಗಳಲ್ಲಿ ಮಹಿಳೆಯರ ಖಾತೆಗಳಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಹಣದ ವಿಳಂಬಕ್ಕೆ ಕಾರಣಗಳು ಏನು?
ಈಗ ಕೆಲವೊಂದು ಅಷ್ಟು ಖಾತೆಗಳಲ್ಲಿ 23ನೇ ಕಂತಿನ ಹಣವು ತಲುಪದೇ ಇರಲು ಮುಖ್ಯ ಕಾರಣಗಳು ಏನೆಂದರೆ ಆ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು. ಹಾಗೆ ತಮ್ಮ ರೇಷನ್ ಕಾರ್ಡಿಗೆ EKYC ಆಗದೆ ಇರುವುದು. ಅಷ್ಟೇ ಅಲ್ಲದೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಆಧಾರ್ ಕಾರ್ಡ್ ಲಿಂಕ್ ಹಾಗೂ NPCI ಮ್ಯಾಪಿಂಗ್ ಆಗದೆ ಇರುವುದು ಮುಖ್ಯ ಕಾರಣಗಳು ಆಗಿವೆ.
ಹಾಗೆ ಇನ್ನೊಂದು ಸಮಸ್ಯೆ ಅಂದರೆ ಅದು ಸರ್ಕಾರದ ಕಡೆಯಿಂದ ಈಗ ಈ ಒಂದು ಹಣವನ್ನು DBT ಮೂಲಕ ವರ್ಗಾವಣೆ ಮಾಡುವಂತಹ ಸಮಯದಲ್ಲಿ ಈಗ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆಯನ್ನು ಹಣ ಜಮಾ ಆಗುವದರಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಸ್ಟೇಟಸ್ ಅನ್ನ ಚೆಕ್ ಮಾಡುವುದು ಹೇಗೆ?
- ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಪ್ಲೇ ಸ್ಟೋರಿಗೆ ಹೋಗಿ ಅದರಲ್ಲಿ ಕರ್ನಾಟಕ ಡಿಬಿಟಿ ಎಂಬ ಅಪ್ಲಿಕೇಶನ್ ಅನ್ನು ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಲಾಗಿನ್ ಆಗಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ನಿಮ್ಮ ಮೊಬೈಲ್ ನಂಬರ್ ಗೆ ಬಂದು ಒಟಿಪಿ ಎಂಟರ್ ಮಾಡಿ ಲಾಗಿನ್ ಆಗಬೇಕಾಗುತ್ತದೆ.
- ತದನಂತರ ನೀವು ಅದರಲ್ಲಿ ಪೇಮೆಂಟ್ ಸ್ಟೇಟಸ್ನ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ಇದುವರೆಗೂ ಸರ್ಕಾರದ ಕಡೆಯಿಂದ ಪಡೆದಿರುವಂತ ಪ್ರತಿಯೊಂದು ಯೋಜನೆಗಳ ಮಾಹಿತಿ ಇರುತ್ತದೆ. ಆನಂತರ ಇದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಇದುವರೆಗೂ ಜಮಾ ಆಗಿರುವಂತ ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.